ಒಂದು ದಿನ
ಕವಿಯ ಮನದಿ
ಮೂಡಿತು ಒಂದು ಕವನ ।।ಪ ।।
ಮೈ ಮನ ತಲ್ಲಣ
ಆದ ಕವಿಯು ಒಂದು ಕ್ಷಣ ।।ಅ .ಪ ।।
ಕಾರ್ಮೋಡ ತುಂಬಿದ ಅಂಬರ
ಅದು ಕವಿತೆಯ ಹಂದರ
ಚೆಲುವಿನ ಚೆಂದದ ಪ್ರಕೃತಿ
ಅದು ಕವಿತೆಗೆ ಸುಂದರ ಆಕೃತಿ ।।೧।।
ಹುಣ್ಣಿಮೆಯ ಚಂದ್ರನ ತಂಪು
ತುಂಬಿತು ಕವನಕೆ ತಂಪು
ಪ್ರಾಣಿ ಪಕ್ಷಿಗಳ ಆಟ
ತುಂಬಿತು ಕವನಕೆ ಸಂಗೀತ ।।೨।।
ನೀರಿನ ಜುಳು ಜುಳು ನಾದ
ನೀಡಿತು ಕವನಕೆ ಮೋದ
ಮರಗಿಡಗಳ ಹಸಿರು
ನೀಡಿತು ಕವನಕೆ ಉಸಿರು ।।೩।।
ಕಾಣುವ ಸ್ರಷ್ಠಿಯ ಮಾಟ
ನಡುವೆ ಮಾನವನ ಓಟ
ಅರ್ಥವಾಗದ ಗುಪ್ತ ಈ ಭುವನ
ಧನ್ಯ ಅರಿತು ಬರೆದರೆ ಕವಿಯ ಜೀವನ ।।೪।।
--೦೬/೦೮/೧೩
--ಕಬ್ಬನ್ ಪಾರ್ಕ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ