Translate

ಶನಿವಾರ, ಮಾರ್ಚ್ 3, 2018

ಮಂದಾರ್ತಿ ಕ್ಷೇತ್ರ ಮಹಾತ್ಮೆ

ಮಂದಾರ್ತಿ ಕ್ಷೇತ್ರ ಮಹಾತ್ಮೆಯ ಸಾರಾಂಶ:




    ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ, ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು ಮಹೇಶ್ವರನ ಮಗ ಸುಬ್ರಹ್ಮಣ್ಯಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ, ಪರಮೇಶ್ವರನನ್ನು ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕದ ಸಹ್ಯಾದ್ರಿ ಪರ್ವತದ ಬಳಿ ಕಾಡ್ಗಿಚ್ಚಿನಲ್ಲಿಸಿಕ್ಕು ಪರಿತಪಿಸುತ್ತಿದ್ದರು. ವ್ಯಾಘೃಪಾದ ಮಹರ್ಷಿಗಳು ಸಹ್ಯಾದ್ರಿ ಪರ್ವತದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ಭರಭರ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ, ಗತಿ ಕುಂಟಿತವಾಗಿ ಬಿದಿರು ಮಳೆಗೆ ಸೀಮಿತವಾಗಿರುವಂತಹ ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು ಹರಸಿದಂತೆ,ಆವಂತಿಯ ರಾಜ ದೇವವರ್ಮನು ರಾಜ್ಯಬ್ರಷ್ಠನಾಗಿ ವೇಷ ಮೆರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗುವಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ, ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಅವುಗಳಲ್ಲಿ ಮಂದರತಿಯೆಂಬ ನಾಗ ಸರ್ಪವು ಸೇರಿದ ಜಾಗವೇ ಮಂದರತಿ ಕಾನನವೆಂಬ (ಮಂದಾರ್ತಿ ) ಹೆಸರಾಯಿತು.

    ಕಾಲಾನಂತರದಲ್ಲಿ ಆ ನಾಗ ಕನ್ಯೆಯರು ದೇವವರ್ಮ ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತಿಳಿಸಿದಂತೆ ದೇವವರ್ಮ ರಾಜನು, ಹೇಮಾದ್ರಿಯ ರಾಜಾದಿತ್ಯನ ಏಕೈಕ ಪುತ್ರಿ ಜಲಜಾಕ್ಷಿಯನ್ನು ಪ್ರಾಣಾಪಾಯದಿಂದ ಬದುಕಿಸಿದ್ದಕ್ಕೆ, ಆ ರಾಜನು ರಾಜ್ಯವನ್ನು ಹಾಗೂ ಮಗಳನ್ನು ದಾರೆಯೆರೆಯುತ್ತಾನೆ.

     ವ್ಯಾಘ್ರಪಾದ ಮುನಿ ಮತ್ತು ತಾಮಸ ಗುಣದ ಕಿರಾತ ತರುಣಿ ಮಾಲಿನಿಯೊಂದಿಗಿನ ಸಂಪರ್ಕದ, ಅಕಾಲಿಕ ಗರ್ಬೋತ್ಪತ್ತಿಯಿಂದ ಜನಿಸಿದ ಮಹಿಷನು, ದೇವವರ್ಮ ಮಹಾರಾಜನ ಪತ್ನಿ ಜಲಜಾಕ್ಷಿಯನ್ನು ಕಂಡು ಆಕೆಯ ರೂಪಲಾವಣ್ಯಕ್ಕೆ ಮನಸೋತು, ತನ್ನ ಮನೋಭಿಲಾಶೆಯನ್ನು ತಿರಸ್ಕರಿಸಿದ ಆಕೆಯನ್ನು ಬಲಾತ್ಕರಿಸಲು ಮುಂದಾದಾಗ ರಕ್ಕಸನಿಂದ ತಪ್ಪಿಸಿಕೊಂಡು ಅರಮನೆ ಸೇರುತ್ತಾಳೆ. ನಂತರ ಆ ರಾಜ ದಂಪತಿಗಳು ಮಂದಾರ್ತಿ ಕಾನನದಲ್ಲಿ ನೆಲೆಸಿದ್ದ ಸುದೇವ ಮುನಿಯ ಆಶ್ರಯದಲ್ಲಿದ್ದಾಗ, ಮಹಿಷನ ಅಣತಿಯಂತೆ, ಮಹೋಧರ ರಕ್ಕಸನು ಮುನಿಯ ಮೇಲೆ ಶರಪ್ರಯೋಗಿಸತೊಡಗುತ್ತಾನೆ. ಆಗ ಮುನಿಯ ದೇವಿಯನ್ನು ಸ್ತುತಿಸಿದಾಗ ರಕ್ಕಸನೆದುರು ಬೃಹದಾಕಾರದ ಹುತ್ತವೊಂದು ಎದ್ದು ನಿಲ್ಲುತ್ತದೆ. ರಕ್ಕಸನ ಎಲ್ಲ ಅಸ್ತ್ರಗಳು ಹುತ್ತದಲ್ಲಿ ಮಾಯವಾಗುತ್ತವೆ. ರಾಜದಂಪತಿಗಳ ಪ್ರಾರ್ಥನೆಯಂತೆ ದೇವಿಯು ವೀರಭದ್ರ, ಹಾಯ್ಗುಳಿ, ಕಲ್ಲುಕುಟಿಗ ಮತ್ತು ಬೊಬ್ಬಾರ್ಯರ ಸಹಾಯದಿಂದ ಎಲ್ಲ ರಕ್ಕಸರ ಸಂಹಾರ ಮಾಡಿದಳು.

     ನಂತರ ಮಹಿಷನು, ಸ್ವತಹ ಯುದ್ದಕ್ಕೆ ಮುಂದಾಗಿ ತಾನು ಎಸೆದ ಅಸ್ತ್ರಗಳು ಕೂಡಾ ಮಾಯವಾಗಿ ಅವನ ಕಣ್ಣಿಗೆ ಒಮ್ಮೆ ಹುತ್ತವೂ ಮತ್ತೊಮ್ಮೆ ಅಷ್ಟಭುಜಾಂಕಿತೆಯಾದ ದುರ್ಗಾಮಾತೆಯು ಕಾಣಲು, ಅವನಿಗೆ ಜ್ಞಾನೋದಯವಾಗುತ್ತದೆ. ಮಹಿಷನು ದೇವಿಗೆ ಶರಣಾಗಿ , ತಾನು ಭೂಲೋಕದಲ್ಲಿ ಜನಿಸಿದ ಕುರುವಾಗಿ ಸಹ್ಯಾದ್ರಿಯಲ್ಲಿ ತನ್ನನ್ನು ಪೂಜಿಸುವಂತೆ ಮತ್ತು ನಿನ್ನ ಕ್ಷೇತ್ರದಲ್ಲಿ ಪ್ರತಿವರ್ಷ ಕೆಂಡಸೇವೆ ನಡೆಸುವಂತೆಯೂ, ಹಾಗೆ ಕೆಂಡ ಸೇವೆ ನಡೆಸಿದ ಸುಮಂಗಲೆಯವರ ಇಷ್ಟಾರ್ಥ ನೆರವೇರಿಸುವಂತೆ ಅನುಗ್ರಹಿಸಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿ, ಮಹಿಷನು ತನ್ನ ಜೀವ ಪುಷ್ಪವನ್ನು ದೇವಿಯ ಪಾದಕ್ಕೆ ಸಮರ್ಪಿಸುತ್ತಾನೆ.


        ಸುದೇವ ಮುನಿ ಮತ್ತು ದೇವವರ್ಮ ರಾಜದಂಪತಿಗಳು ದೇವಿಯನ್ನು ವಿಧವಿಧವಾಗಿ ಸ್ತುತಿಸಿ, ಪೂಜಿಸಿ ಹರಿವಾಣದಲ್ಲಿ ನೈವೇದ್ಯವನ್ನು ಅರ್ಪಿಸಿದರು. ದೇವಿಯು ಪ್ರಸನ್ನಚಿತ್ತಳಾಗಿ ಇಂದಿನಿಂದ ತಾನಿಲ್ಲಿ “ ದುರ್ಗಾಪರಮೇಶ್ವರಿ” ಎಂಬ ಹೆಸರಿನಿಂದ ನೆಲೆಸಿ ತನ್ನನ್ನು ಭಕ್ತಿಯಿಂದ ಆರಾಧಿಸುವವರ ಸಕಲ ದುರಿತಗಳನ್ನು ನಿವಾರಿಸಿ, ಅವರ ಸಕಲಾಭೀಷ್ಟ ಸಿದ್ದಿಸುವುದೆಂದು ವರವನ್ನಿತ್ತಳು.

      ದೇವವರ್ಮರಾಜನು ಈ ಹಿಂದೆ ಸ್ವಷ್ನದಲ್ಲಿ ಸುಬ್ರಹ್ಮಣ್ಯನು ತಿಳಿಸಿದಂತೆ ವಾರಾಹಿ ನದಿಯಲ್ಲಿದ್ದ ಶ್ರೀ ದುರ್ಗಾಪರಮೇಶ್ವರಿ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿದನು.

ಮಂದಾರ್ತಿ ಕ್ಷೇತ್ರ ಮಹಾತ್ಮೆ ವೀಡಿಯೊ ನೋಡಲು ಕೆಳಗಿನ  ಲಿಂಕ್ ಒತ್ತಿರಿ

Mandarthi Kshethra Mahatme Full Yakshagana



ದೇವಸ್ಥಾನಕ್ಕೆ ಬರುವುದಕ್ಕೆ ದಾರಿ ಕೆಳಗಡೆ ಇದೆ ನೋಡಿ ...

ಶನಿವಾರ, ಅಕ್ಟೋಬರ್ 28, 2017

ರಂಗದ ರಾಜ

ವಿದಾಯ ವಿದಾಯ
ವಿದಾಯಗಳು ನಿಮಗೆ || ಪ ||

ರಂಗದಿ ಮೆರೆದಿರಿ
ರಂಗವ ಮೆರೆಯಿಸದಿರಿ
ರಂಗವ ಬೆಳೆಯಿಸಿದಿರಿ ನೀವು || ೧ ||

ಹಗಲಿನ ಸೂರ್ಯ
ರಾತ್ರಿ ಉದಯಿಸಿದಂತೆ
ನೀವು ರಂಗಕ್ಕೆ ಬಂದ ಆ ಕ್ಷಣ || ೨ ||

ಸಿಡಿಲು ಗುಡುಗಿನ ಹೂಂ ಕಾರ
ರಂಗದಿ ನಟಿಸಿದ
ನಿಮ್ಮ ಪಾತ್ರಗಳ ಝೆಂಕಾರ || ೩ ||

ರಂಗದ ರಾಜ
ನಟ ಸಾರ್ವಭೌಮ
ಹೇಗೆ  ಬಣ್ಣಿಯಿಸಿದರು ಸಾಲದು ನಿಮ್ಮ ||೪||

ಕುಣಿದರು ನಲಿದರು
ತಣಿಯದ ಮೋಹ
ಎಂದೂ ದಣಿವರಿಯದ ದೇಹ || ೫||

ಇಂದು ಎಂದೂ ಮುಂದೆಂದೂ
ಕೇಳಿಸದು ಅಜ್ಜನ
ಕಾಲಿನ ಗೆಜ್ಜೆಯ ನಾದ ।।೬।।


ಆ  ರಂಗದಿ ವೇಷವ ಧರಿಸಿ
ಆ ರಂಗನ ಮನವ ತಣಿಸಿ
ಯಕ್ಷಲೋಕಕೆ ಬೇಗನೆ ಮರಳಿ ।।೭।।
                           
                                                                                               ---ಬೆಳ್ಳಂದೂರು
                                                                                               ---೧೪/೧೦/೨೦೧೭

ರಂಗದ ರಾಜ


ಶುಕ್ರವಾರ, ಅಕ್ಟೋಬರ್ 13, 2017

ವಸಂತ ಗೀತೆ

ಮಾಮರದಿ ಕೋಗಿಲೆ ಹಾಡಲು 
ಮೊಗ್ಗೊಂದು ಹೂವಾಗಿ ಅರಳಲು 
ಬಂತು ವಸಂತ , ಬಂತು ವಸಂತ  ।।ಪ ।।

ತಂಗಾಳಿ ಮೆಲ್ಲನೆ ಸುಳಿದಾಡಲು 
ಭಲಿತ ಫಲಗಳು  ವೃಕ್ಷವ ತುಂಬಿರಲು 
ಪಕ್ಷಿ ಮೃಗಗಳು ಆನಂದದಿ ಮೈಮರೆಯುಲಿರಲು 
ಬಂತು ವಸಂತ , ಬಂತು ವಸಂತ  ।।೧ ।।

ಝರಿಯೊಂದು ತೆವಳುತ್ತ ಸಾಗುತ್ತಿರಲು 
ಕಾರ್ಮೋಡ ಕರಗಿ ಬಾನು ಶುಭ್ರವಾಗಲು 
ಉದುರಿದೆಲೆ ಚಿಗುರಿಮರ ಕಂಗೊಳಿಸುತಿರಲು 
ಬಂತು ವಸಂತ , ಬಂತು ವಸಂತ  ।೨ ।।

ಸಸ್ಯ ಕೋಟಿ ಜಗಕೆ ತಂಪಾ ನೀಯುತಿರಲು 
ಫಲ ಪುಷ್ಪಾ ಜಗದ ಹೃದಯ ತುಂಬಿರಲು 
ಪ್ರಕೃತಿಯು ಜಗಕೆ ಹಸಿರ ಹಾಸಿರಲು 
ಬಂತು ವಸಂತ , ಬಂತು ವಸಂತ  ।।೩ ।।

                                                                       
----೦೩/೦೮/೨೦೧೩
------ಕಬ್ಬನ್ ಪಾರ್ಕ್ 

 ವಸಂತ ಗೀತೆ





           

ಮತ್ತೆ ಅಸೆ

ಮತ್ತು ಬಂದಿದೆ ಇಂದು 
ಮತ್ತವಳ ಹೆಸರೇನು ಕೇಳಿ 
ಮತ್ತೆ ಸಿಗುವಳೇ ಆಕೆ 
ಒಲವಿನಾಕೆ  ।। ಪ  ।।

ಅಂದು ನಸು ಸಂಜೆ
ನಡೆದು ಹೋದಾಕೆ 
ಮತ್ತೆ ಕಾಣಲಿಲ್ಲ 
ರವಿ ತೇಜದ ಅವಳ ಮೊಗ ।।೧।।

ಅರಸಿ ನಡೆದಿದ್ದೆ 
ನಾನೆಷ್ಟೋ  ಬಾರಿ 
ಅವಳು ಸಿಗುವಳೆಂದು 
ನೂರೊಂದು ಬಾರಿ  ।।೨।।

ಕಂಡಿದ್ದೆ  ಕೊನೆಯ ಬಾರಿ 
ನಗುವ ಕೆಂದುಟಿಯನ್ನ 
ಕೋಮಲ ವಿಮಲ 
ಮುಂದುರುಳು ನಗುವನ್ನು ।।೩।।

ಇಂದು ಯಾರೋ ಹೇಳಿದರು 
ಕರಾವಳಿಯ ಜಡಿ ಮಳೆಯಲ್ಲಿ 
ಬಸ್ಸಿಗೆ ಕಾಯುತ್ತಾ ನಿಂತಿದ್ದಳು 
ಕಂದಮ್ಮನ ಹಿಡಿದಿದ್ದಳು ಕೈಯಲ್ಲಿ  ಎಂದು ।।೪।।

                                                                                -೧೭-೦೭-೨೦೧೪
                                                                                -ಕಳ್ತೂರು -ಸುಳ್ಳಿ 

 ಮತ್ತೆ ಅಸೆ 

ಭಾನುವಾರ, ಅಕ್ಟೋಬರ್ 8, 2017

ಯಕ್ಷ ಕೋಗಿಲೆ

ಹಾಡುವ ಕೋಗಿಲೆಯನ್ನು 
ಬಿಡದೆ ಕಾಡಿತ್ತು  ಕಾಲ 
ಬಿಡದೆ ಕಾಡಿತ್ತು ।।ಪ ।।

ಅರಳಿ ಮಕರಂಧವ 
ಸೂಸುವ ಮುನ್ನವೇ 
ಜಾರಿ ಮರೆಯಾಗಿತ್ತು ।। ಅ ಪ ।।

ರಾಗದ ಇಂಪಿಗೆ 
ತಂಪಿನ ರಾತ್ರಿ 
ಕಂಪನು ಸೂಸುತಿತ್ತು ।।೧।।

  ಸವಿಯುವ ಮೈಮನ 
ತುಂಬಿರೆ  ಮನದಲ್ಲಿ 
ಮೈಲುಗಳೇ ಸಾಗುತಿತ್ತು ।।೨।।

ಕೀರ್ತಿ ಪತಾಕೆ ಹಾರಿಸಿದ 
ರಾಗವ ಸವಿದು ದಣಿದ 
ಮನವು ಕುಣಿಯುತಿತ್ತು ।।೩।।

ರಸಿಕರ ಬಾರ್ಗವ 
ನೂರ್ಕಾಲ ಬಾಳೆಂದು 
ಕರಾವಳಿ ಆಶೀರ್ವದಿಸುತಿತ್ತು ।।೪।।

ಭಾವಕರ ಮನವ 
ಕಂಪಿಸಿದ ದೇಹ 
ಅಂದು ಮಾತ್ರ ತಂಪಾಗಿತ್ತು ।।೫।।

ರಸಿಕರ ಲೋಕಕೆ 
ಬೇಗನೆ ಮರಳಿ 
ಬರುವೆ ಎಂದು ಸಾಗಿತ್ತು ।।೬।।

                                                                                --೨೮/೦೮/೧೪
                                                                                -- ಶೇಷಾದ್ರಿಪುರ

 ಯಕ್ಷ ಕೋಗಿಲೆ 

ಒಂಟಿ ಜೀವನ

                                   


ಒಂಟಿಯಾದೆನಲ್ಲೋ  ಮನಸೇ 
ಒಂಟಿಮಾಡಿದೆಯಲ್ಲೋ  ಕನಸೇ  ।।ಪ ।।

ಅನ್ಯರು ಗೈದುದೆಲ್ಲಾ ತಪ್ಪು 
ಎಂದು ಜರಿಯುತಿದ್ದ ಮನಸ್ಸು 
ತನ್ನ ತಪ್ಪನ್ನು ಅರಿವಾ ಮುಂಚೆ
ಒಂಟಿ ಮಾಡಿದೆಯಾ ।।೧।।

ಜಗವ ತಿಳಿದಿರ್ಪ  ನಾ ಒಬ್ಬನೇ 
ಅನ್ಯರು ಏನು ತಿಳಿಯದ ಮೂಢರೆಂಬ 
ಅಹಂಕಾರವ ತುಂಬಿಸಿ ಎನ್ನ 
ಒಂಟಿ ಮಾಡಿದೆಯಾ ।।೨।।

ದೂರ್ತನೆಂದು ಅನ್ಯರು ಗ್ರಹಿಸಿ 
ದೂರವಿರುವುದೇ ಲೇಸೆಂದು ಬಯಸಿ  
ತೊರೆದು ದೂರ ಸಾಗಿ ಹೋದರು 
ಯನ್ನ ಒಂಟಿ ಮಾಡಿ ಜನರು ।।೩।।

ಪರಮ ಪಾವನ ಜನ್ಮವ 
ನಲಿದು ಹರುಷದಿ ಕಳೆಯದೆ 
ಪರಮ ಪಾವನ ಜಗದ್ಹಾಂಬೆಯ 
ಪಾದವ ಸೇರುವ ಮುಂಚೆ ಒಂಟಿಯಾದೆ ನಾ ।।೪।।

                                                                               -- ೨೩/೦೪/೨೦೧೪
                                                                                 --  ಶೇಷಾದ್ರಿಪುರ 



ಮನದಿ ಮೂಡಿದ

                                

ಒಂದು ದಿನ
ಕವಿಯ ಮನದಿ
ಮೂಡಿತು ಒಂದು ಕವನ ।।ಪ ।।

ಮೈ ಮನ ತಲ್ಲಣ
ಆದ ಕವಿಯು ಒಂದು ಕ್ಷಣ ।।ಅ .ಪ ।।

ಕಾರ್ಮೋಡ ತುಂಬಿದ ಅಂಬರ
ಅದು ಕವಿತೆಯ ಹಂದರ
ಚೆಲುವಿನ ಚೆಂದದ ಪ್ರಕೃತಿ
ಅದು ಕವಿತೆಗೆ ಸುಂದರ ಆಕೃತಿ ।।೧।।

ಹುಣ್ಣಿಮೆಯ ಚಂದ್ರನ ತಂಪು
ತುಂಬಿತು ಕವನಕೆ ತಂಪು
ಪ್ರಾಣಿ ಪಕ್ಷಿಗಳ ಆಟ
ತುಂಬಿತು ಕವನಕೆ ಸಂಗೀತ ।।೨।।

ನೀರಿನ ಜುಳು ಜುಳು ನಾದ
ನೀಡಿತು ಕವನಕೆ ಮೋದ
ಮರಗಿಡಗಳ  ಹಸಿರು
ನೀಡಿತು ಕವನಕೆ ಉಸಿರು ।।೩।।

ಕಾಣುವ  ಸ್ರಷ್ಠಿಯ  ಮಾಟ
ನಡುವೆ ಮಾನವನ ಓಟ
ಅರ್ಥವಾಗದ ಗುಪ್ತ ಈ ಭುವನ
ಧನ್ಯ ಅರಿತು  ಬರೆದರೆ ಕವಿಯ ಜೀವನ ।।೪।।

                                                                                 --೦೬/೦೮/೧೩
                                                                                --ಕಬ್ಬನ್ ಪಾರ್ಕ್